Skip to main content

ಇಸ್ಲಾಂ ಮತ್ತು ಪರ್ದಾ


☪ ಇಸ್ಲಾಂ ಸ್ತ್ರೀಯನ್ನು ಪರ್ಧಾದೊಳಗೆ ಬಂಧನದಲ್ಲಿಡುತ್ತದೆ.
 ಇತರ ಧರ್ಮದವರು ಸ್ತ್ರೀಗಳಿಗೆ ಅವರಿಗೆ ಇಷ್ಟಪಟ್ಟ ವಸ್ತ್ರಗಳನ್ನು ಧರಿಸಲು ಅನುಮತಿ ಕೊಡುತದೆ.
ಎಂದೆಲ್ಲ ಹೇಳುವವರು ಹಾಗು
 ಯಾತಕ್ಕಾಗಿ ಇಸ್ಲಾಂ ಸ್ತ್ರೀಯರೊಂದಿಗೆ ತಲೆ ಮುಚ್ಚಬೇಕೆಂದು  ಕಲ್ಪಿಸಿರುವುದು? ಎಂದು  ಕೆಲವು ಇಸ್ಲಾಮಿಕ ವಿಮರ್ಶಕರು ಪ್ರಶ್ನಿಸುತ್ತಲೇ ಇರುತ್ತಾರೆ!.

*ವಸ್ತ್ರ ಧಾರಣೆ ಇತರ ಧರ್ಮಗಳಲ್ಲಿ ಹೇಗೆ ಎಂದು ನಮಗೊಮ್ಮೆ ಸಣ್ಣದಾಗಿ ಪರಿಶೋಧಿಸೋಣ.*

▶ಕ್ರಿಸ್ತು ಧರ್ಮದಲ್ಲಿ ಶಿರವಸ್ತ್ರ ಉಪಯೋಗಿಸುದಿಲ್ಲವಾದರೆ ಕೂದಲು ಕ್ಷೌರ ಮಾಡಿ ತೆಗೆಯಬೇಕೆಂದು *ಬೈಬಲ್* ಕಲ್ಪಿಸುತ್ತದೆ. " ಸ್ತ್ರೀ ಶಿರವಸ್ತ್ರ ಉಪಯೋಗಿಸುದಿಲ್ಲವಾದರೆ ಕೂದಲು ಕತ್ತರಿಸಿ ತೆಗೆಯಲಿ, ಕೂದಲು ಕತ್ತರಿಸಿ ತೆಗೆಯುವುದು ಅವಳಿಗೆ ನಾಚಿಕೆ ಆಗುದಾದರೆ ಅವಳು ಶಿರವಸ್ತ್ರ ಧರಿಸಲಿ"
( 1ಕೊರಿಂಡಿಯನ್ಸ್ 11:6)

'" ಸ್ತ್ರೀ ಪುರುಷರದ್ದೋ, ಪುರುಷ ಸ್ತ್ರೀಯರದ್ದೋ ವಸ್ತ್ರ ಧರಿಸಬಾರದು, ಹಾಗೆ ಯಾರಾದರು ಧರಿಸಿದರೆ  ಅವನು ಅವನ ದೇವನಾದ ಏಸುದೇವನಿಗೆ ನಿಂದ್ಯಕರಾಗುತ್ತಾರೆ.
(ಆವರ್ತ್ತನ ಪುಸ್ತಕ 22:5)

" ಸ್ತ್ರೀಗಳು ವಿನಯದಿಂದಲೂ, ವಿವೇಕದಿಂದಲೂ ಉತ್ತಮವಾದ ವಿಧದಲ್ಲಿ ವಸ್ತ್ರ ಧಾರಣೆ ಮಾಡಿ ನಡೆಯಬೇಕೆಂದು ನಾನು ಉಪದೇಶಿಸುವೆನು, ತುಂಬಿದ ಕೂದಲು, ಸ್ವರ್ಣ, ರತ್ನ, ಹಾಗು ಬೆಲೆಯೇರಿದ ವಸ್ತುಗಳನ್ನು ತೊಟ್ಟು ತಮ್ನನ್ನು ತಾವೇ ಅಲಂಕರಿಸಬಾರದು.
(ತಿಮೋತ್ತಯಸ್ 2:9)

ನೋಡಿ ಬೈಬಲ್ ನಲ್ಲಿ ಶಿರವಸ್ತ್ರ ಧರಿಸಲು ಕಲ್ಪಿಸುತ್ತದೆ. ಚಿನ್ನ ಹಾಗು ಬೆಲೆಯೇರಿದ ವಸ್ತ್ರಗಳು ಉಪಯೋಗಿಸಲು ಅನುಮತಿ ಕೊಡುವುದಿಲ್ಲ. ಆದರೂ ಕ್ರೈಸ್ತವರು ಬೇಕಾದ ಹಾಗೆ ವಸ್ತ್ರ ಧರಿಸುತ್ತಾರೆ. ಅವರ ಇಗರ್ಜಿಗಳಲ್ಲಿ ಕೂಡಾ ಈ ಮರ್ಯಾದೆಗಳು ಪಾಲಿಸುವುದಿಲ್ಲ. ಪಾಲಿಸುವುದು ಕನ್ಯಾಸ್ತ್ರೀಗಳು ಮಾತ್ರ. ಅವರು ಮಾತ್ರ ಯಾತಕ್ಕಾಗಿ ಶರೀರವನ್ನು ಮುಚ್ಚಿ ಸಂರಕ್ಷಿಸುವುದು?
ಬಾಕಿ ಇರುವ ಸ್ತ್ರಿಗಳ ಶರೀರ ಹೇಗೆ ಬೇಕಾದರೂ ಪ್ರದರ್ಶಿಸಬಹುದು ಎಂದಾ?

▶ಹಿಂದು ಗ್ರಂಥಗಳಲ್ಲಿ ನೋಡೋಣ..

" ದೇವರು ನಿನನ್ನು ಸ್ತ್ರಿಯಾಗಿ ಸೃಷ್ಟಿಸಿರುತ್ತಾನೆ ನೀನು ನಿನ್ನ ದೃಷ್ಟಿ ತಗ್ಗಿಸಿಯು, ಮನುಷ್ಯರ ನೇರಕ್ಕೆ ನೋಡದೆ ಇರಬೇಕೆಂದು ಹಾಗೂ ಕಾಲುಗಳು ಹತ್ತಿರವಾಗಿ ಇಡಬೇಕೆಂದು, ವಸ್ತ್ರ ತೋರಿಸಬಾರದೆಂದು, ಶಿರವಸ್ತ್ರ ಉಪಯೋಗಿಸಬೇಕೆಂದು ಹೇಳುತ್ತದೆ.
( ಋಗ್ವೇದ 8:33: 19-20)

ರಾಮನು ಪರಶುರಾಮನನ್ನು ಕಂಡಾಗ ಸೀತೆಯೊಂದಿಗೆ ಹೇಳುತ್ತಾನೆ *ಸೀತೆ ನೀನು ಶಿರವಸ್ತ್ರ ಉಪಯೋಗಿಸಬೇಕು ಹಾಗೂ ನೀನು ನಿನ್ನ ದೃಷ್ಟಿ ತಗ್ಗಿಸಿಯು ಇರಬೇಕು.*
( ಮಹಾವೀರ್ ಚರಿತ ಆಕ್ಟ್ 2 ಪುಟ: 71)

" ಪುರುಷರು ಸ್ತ್ರಿಗಳ ವಸ್ತ್ರ ಧರಿಸಬಾರದು"
(ಋಗ್ವೇದ 10:85:30)

ಇದರಿಂದ ನಮಗೆ ಹಲವು ವಿಷಯಗಳನ್ನು ತಿಳಿಯಲು ಸಾದ್ಯವಾಗಬಹುದು ತಾನೇ...!

ಶಿರವಸ್ತ್ರ ಧರಿಸಲು ಕಲಿಸುವ ಹಿಂದು ವೇದದಂತೆ ಎಷ್ಟು ಹಿಂದುಗಳು ಪೂರ್ಣ ವಸ್ತ್ರ ಧರಿಸುತ್ತಾರೆ.?

ಅನ್ಯ ಪುರುಷನಾದ ಪರಶುರಾಮನನ್ನು ಕಂಡಾಗ ಸೀತೆಯ ಬಳಿ  ಶಿರವಸ್ತ್ರ ಧರಿಸಲು ಹೇಳಿದ ರಾಮನಲ್ಲಿ ಒಳ್ಳೆಯ ಪತಿಯನ್ನು ಕಾಣಲು ಸಾಧ್ಯವಾಗುತ್ತದೆ.

ಇಂದು ಚಿತ್ರಗಾರರು ಸೀತೆಯ ಚಿತ್ರವನ್ನು ಯಾವ ರೂಪದಲ್ಲಾಗಿದೆ ಬರೆಯುವುದೆಂದು ನಮಗೆ ಗೊತ್ತು ಹೆಚ್ಚು ಹೇಳಬೇಕಾಗಿ ಇಲ್ಲ ತಾನೇ..

ಆದರೆ ಭಾರತದ ಹಲವು ಗ್ರಾಮಗಳಿಗೆ ಹೋದರೆ ತಲೆ ಮುಚ್ಚುವ ಹಿಂದು ಮಹಿಳೆಯರನ್ನು ಕಾಣಲು ಸಾಧ್ಯವಾಗುತ್ತದೆ.
ಕೆಲವು ಸ್ಥಳಗಳಲ್ಲಿ ಅನ್ಯ ಪುರುಷರನ್ನು ಕಾಣುವಾಗ ಮಹಿಳೆಯರು ಮುಖವನ್ನು ಕೂಡ ಮುಚ್ಚುತ್ತಾರೆ.!
 ಇಸ್ಲಾಮಿಕ ವಿಮರ್ಶಕರು,  ಇದು ಯಾವುದು ಕಾಣುವುದೇ ಇಲ್ಲ.!

ಸ್ವತಃ ಧರ್ಮ ಗ್ರಂಥಗಳಲ್ಲಿ ಮಹಿಳೆಯರ ವಸ್ತ್ರ ಧಾರಣೆಯ ಕುರಿತು ಏನು ಹೇಳುತ್ತಾರೆ ಎಂದು ಕೂಡ ಕಲಿಯದೆ/ತಿಳಿಯದೆ ಇಸ್ಲಾಮನ್ನು ವಿಮರ್ಶಿಸಲು ಬಾಯಿ ತೆರೆಯುವವರು ಇವನ್ನೆಲ್ಲಾ ಕಲಿತ ಬಳಿಕ ತಮ್ಮ ನಾಲಗೆ ತೆರೆಯಬೇಕು.

ಇಸ್ಲಾಮಿನ ಮಹಿಳೆಯರ ವಸ್ತ್ರ ಧಾರಣೆಯಾಗಿದೆ ಸ್ತ್ರೀಗಳಿಗೆ ಅತೀ ಹೆಚ್ಚು ಪರಿಪೂರ್ಣ ಯೋಗ್ಯವಾದ ವಸ್ತ್ರಧಾರಣೆ. ಅದರ ಕಾರಣವು ಖುರ್ಆನ್ ಹೇಳುತ್ತದೆ ನೋಡಿ..

*ನಬಿಯೇ ﷺ,  ತಮ್ಮ ಪತ್ನಿಯವರೊಂದಿಗೂ, ಪುತ್ರಿಯರೊಂದಿಗೂ, ಸತ್ಯವಿಶ್ವಾಸಿಗಳಾದ ಸ್ತ್ರೀಯರೊಂದಿಗೂ ಅವರು ತಮ್ಮ ಶಿರವಸ್ತ್ರಗಳನ್ನು ಕೆಳಗಿಳಿಸಿ ಪೂರ್ಣವಾಗಿ ಧರಿಸಲು ಹೇಳಿರಿ. ಅವರನ್ನು ಅರಿಯಲ್ಪಡಲು, ಹಾಗೂ ಅವರು ಉಪದ್ರವಿಸದೆ ಇರಲು ಇದಾಗಿದೆ ಅತೀ ಹೆಚ್ಚು ಉತ್ತಮವಾಗಿರುವ ವಸ್ತ್ರ. ಅಲ್ಲಾಹು  ಮನ್ನಿಸುವವನು, ಕಾರುಣ್ಯನಿಧಿಯುಳ್ಳವನು ಆಗಿರುತ್ತಾನೆ.*
(ಖುರ್ಆನ್ 33:59)

✍🏻 *ಗಫೂರ್ ಬಾಯಾರ್*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...