Skip to main content

ಬರಾ ಅತ್: ವಿಮೋಚನೆಯ ರಾತ್ರಿ

*ಬರಾ ಅತ್: ವಿಮೋಚನೆಯ ರಾತ್ರಿ*

🎋🎋🎋🎋🎋🎋🎋🎋🎋🎋

✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*

🎋🎋🎋🎋🎋🎋🎋🎋🎋🎋

ಶ'ಅ್ ಬಾನ್ ತಿಂಗಳಲ್ಲಿರುವ ಪವಿತ್ರ ರಾತ್ರಿಯಾಗಿದೆ ಬರಾ ಅತ್ ರಾತ್ರಿ. ಈ ರಾತ್ರಿಗೆ *ಲೈಲತುಲ್ ಮುಬಾರಕ್ ( ಅನುಗ್ರಹೀತ ರಾತ್ರಿ) , ಲೈಲತುಲ್ ಬರಾಅತ್ ( ವಿಮೋಚನೆಯ ರಾತ್ರಿ), ಲೈಲತುರ್ರಹ್ಮ( ಕಾರುಣ್ಯದ ರಾತ್ರಿ)* ಎಂಬ ಹೆಸರುಗಳಿವೆ. ಬರಾಅತ್ ರಾತ್ರಿ ಮಹತ್ವ ವನ್ನು ಸಾರುವ ಧಾರಾಳ ಹದೀಸ್ ಗಳು ನಮಗೆ ಕಾಣಬಹುದು.

ಸಲಪಿಗಳು ಶೈಖುಲ್ ಇಸ್ಲಾಂ ಎಂದು ಬಿರುದು ನೀಡಿ ಗೌರವಿಸಿರುವ ಇಬ್ನು ತೈಮೀಯ ಹೇಳುವುದು ನೋಡಿ.
👇👇👇👇
*ಶ'ಅಬಾನ್ ಹದಿನೈದರ ರಾತ್ರಿಗೆ ಮಹತ್ವವಿದೆ. ಸ್ವಹಾಬಿಗಳು ಅಂದು ಪ್ರತ್ಯೇಕ ನಮಾಝ್ ಮಾಡುತ್ತಿದರು.* ( ಪತಾವಲ್ ಖುಬ್ರಾ)

ಬರಾಅತ್ ವಿರೋಧಿಸುವ ಆಧುನಿಕ ಸಲಪಿಗಳು ಖಾಳಿ ಖುಳಾತ್ ಎಂದೇ ಬಣ್ಣಿಸುವ ಸಲಪಿ ನಾಯಕ ಅಲ್ಭಾನಿಯೂ ಬರಾಅತ್ ಗೆ ಮಹತ್ವ ಇದೆ ಎಂದು ಅಂಗೀಕರಿಸಿದ್ದಾರೆ‌. ಪುಣ್ಯ ದಿನಗಳ ಹಾಗೂ ಪುಣ್ಯ ಕಾರ್ಯಗಳ ಬಗ್ಗೆ ಸದಾ ಅಲರ್ಜಿ ವ್ಯಕ್ತ ಪಡಿಸುವ ಸಲಪಿ ಬರಾ ಅತ್ ಬಗ್ಗೆಯೂ ಅಸಹನೆ ವ್ಯಕ್ತ ಪಡಿಸಿದ್ದಾನೆ.ಆದರೆ ಪೂರ್ವ ಸಲಪಿ ನಾಯಕರು ಬರಾಅತ್ ರಾತ್ರಿಯನ್ನು ಅಂಗೀಕರಿಸಿದವರೂ,ಪುಣ್ಯವಿದೆ ಎಂದು ಹೇಳಿದವರಾಗಿದ್ದಾರೆ.

ಬರಾಅತ್ ರಾತ್ರಿ ನಮಾಝ್ ಮಾಡಲು ಹಾಗೂ ಹಗಲು ಉಪವಾಸ ಹಿಡಿಯಲು, ಪಾಪಮೋಚನೆ ಗಾಗಿ ಪ್ರಾರ್ಥನೆ ಮಾಡಲು ಆದೇಶ ಇರುವ ಧಾರಾಳ ಹದೀಸ್ ಕಾಣಬಹುದು. ಸ್ವಹಾಬಿ ಯಾದ ಇಬ್ನು ಉಮರ್ ರಳಿಯಲ್ಲಾಹು ಅನ್ಹು ರವರು ಮತ್ತು  ಇಮಾಮ್ ಶಾಫಿಈ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ: " ಐದು ರಾತ್ರಿ ಗಳಲ್ಲಿ ದುಆ ಮಾಡಿದರೆ ಆ ದುಆಗೆ ಉತ್ತರವಿದೆ."
👇👇👇
1⃣ *ಶುಕ್ರವಾರ ರಾತ್ರಿ*
2⃣ *ರಜಬ್ ತಿಂಗಳ ಪ್ರಥಮ ರಾತ್ರಿ*
3⃣ *ಶ'ಅಬಾನ್ ಹದಿನೈದರ ರಾತ್ರಿ*
4⃣ *ಈದುಲ್ ಫಿತ್ರ್ ನ ರಾತ್ರಿ*
5⃣ *ಬಕ್ರೀದ್ ರಾತ್ರಿ*

ಈ ಐದು ರಾತ್ರಿ ಗಳಲ್ಲಿ ಒಂದಾಗಿದೆ ಬರಾ ಅತ್ ರಾತ್ರಿ.ಅಂದು ಪ್ರಾರ್ಥನೆಗೆ ಉತ್ತರವಿದೆ. ಹದೀಸ್ ಗಳಿಂದಲೂ ಇಮಾಮ್ ಗಳ ಗ್ರಂಥ ಗಳಿಂದಲೂ ಬರಾಅತ್ ಮಹತ್ವ ವನ್ನು ತಿಳಿದ ನಾವು ಅರೆ ಬುದ್ಧಿಯ ಸಲಪಿಯ ವಾದವನ್ನು ನೋಡಬೇಕಾಗಿಲ್ಲ. *ಜನಿಸಿದ ಮಗುವಿನ ಕಿವಿಗೆ ಬಾಂಗ್ , ಇಖಾಮತ್ ಕೊಟ್ಟರೆ ನರಕಕ್ಕೆಂದು ಹೇಳಿದ ಸಲಪಿ ಬರಾ ಅತ್ ರಾತ್ರಿ ಯನ್ನು ವಿರೋಧಿ ಸುವುದರಲ್ಲಿ ಆಶ್ಚರ್ಯ ಪಡಬೇಕಾಗಿಲ್ಲ.*

ಬರಾಅತ್ ರಾತ್ರಿ ಜನರ ಬಜೆಟ್ ನಿರ್ಣಯಿಸುವ ರಾತ್ರಿ ಯಾದ ಕಾರಣ ಅಂದು ಮಗ್ರಿಬ್ ಬಳಿಕ *ಮೂರು ಯಾಸೀನ್ ಮತ್ತು ಸೂರತ್ ದುಖಾನ್* ಓದಿ ಪ್ರಾರ್ಥಿಸಿದರೆ ದುಆ ಗೆ ಉತ್ತರ ಲಭಿಸಲು ಹೆಚ್ಚು ಸಹಕಾರಿ ಯಾಗುತ್ತದೆ. ಮೂರು ಯಾಸೀನ್ ಓದುವಾಗ ಈ ಉದ್ದೇಶ ಮನದಲ್ಲಿ ಸಂಕಲ್ಪಿಸಬೇಕು.
👇👇👇

👉 *ಆಯುಷ್ಯ ಮತ್ತು ಆರೋಗ್ಯ*
👉 *ವಿಪತ್ತುಗಳಿಂದ ಮತ್ತು ರೋಗ ಗಳಿಂದ ರಕ್ಷಣೆ*
👉 *ಜೀವನದಲ್ಲಿ ಸಮೃದ್ಧಿ ,ಐಶ್ವರ್ಯ ಲಭಿಸಲು*

ಬರಾಅತ್ ರಾತ್ರಿಯಂದು ಗಲ್ಬ್ ಗೋತ್ರದ ಆಡಿನ ರೋಮಕ್ಕಿಂತಲೂ ಅಧಿಕ ಪಾಪವಿದ್ದರೂ ಅಲ್ಲಾಹನು ಕ್ಷಮಿಸುತ್ತಾನೆಂದು ಹದೀಸ್ ಗಳಲ್ಲಿ ಕಾಣಬಹುದು.

ಒಳಿತಿನ ದಿನಗಳು ಪಾಪ ಗಳ ಪರಿಹಾರ ಕ್ಕೂ ಒಳಿತುಗಳನ್ನು ಹೆಚ್ಚಿಸಲೂ ನಾವು ಉಪಯೋಗಿಸೋಣ.ಜೀವನದ ಬ್ಯುಸಿ ಎಂಬ ಕಾರಣವನ್ನು ಪುಣ್ಯ ದಿನಗಳಲ್ಲಾದರೂ ಬದಿಗಿಟ್ಟು ಪುಣ್ಯ ಸಂಪಾದಿಸೋಣ.

🌹🎋🌷🎋🌹🎋🌷🎋🌹🎋🌷

🌳🌳🌳🌳🌳🌳🌳🌳🌳🌳🌳

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...