Skip to main content

ನಾರಿಯತ್ ಸ್ವಲಾತ್ ಹಾಗೂ ಅದರ ಅರ್ಥ ಮತ್ತು ಮಹತ್

ನಾರಿಯತ್ ಸ್ವಲಾತ್ ಹಾಗೂ ಅದರ ಅರ್ಥ ಮತ್ತು ಮಹತ್ವ
❣❣❣❣❣❣❣
ದಿನಾಲು 41 ಸಲ ಅಥವಾ ನೂರು ಸಲ ಅಥವಾ ಅದಕ್ಕೂ ಹೆಚ್ಚು ಸಲ ಈ ಸ್ವಲಾತನ್ನು ಹೇಳಿದರೆ ಅಲ್ಲಾಹನು ಸರ್ವ ದುಃಖ ಗಳನ್ನು ಸಂಕಷ್ಟಗಳನ್ನು ನಿವಾರಿಸುವನು . ಎಲ್ಲಾ ಕಾರ್ಯಗಳನ್ನು ಸುಲಭಗೊಳಿಸುವನು, ಆತ್ಮವು ಬೆಳಗುವುದು , ದರ್ಜೆ ಏರುವುದು, ಅನುಕೂಲ ಉಂಟಾಗುವುದು, ಜೀವನ ಮಾರ್ಗ ಸುಲಭವಾಗುವುದು, ಜನರ ಮನಸ್ಸಿನಲ್ಲಿ ಈ ಸ್ವಲಾತ್ ಹೇಳುವವರ ಬಗ್ಗೆ ಪ್ರೀತಿ ಹುಟ್ಟುವುದು, ಈ ಸ್ವಲಾತನ್ನು ಹೇಳುವವರನ್ನು ಎಲ್ಲರೂ ಪ್ರೀತಿಯಿಂದ ವ್ಯವಹರಿಸುವರು. ಎಂದು ಇಮಾಮ್ ಕ್ವುರ್ ತುಬಿ ರ) ವರದಿಯಾಗಿದೆ.
ಅಲ್ಲಾಹುವಿನ ಅನುಗ್ರಹಗಳು ಅತ್ಯಧಿಕವಾಗಿ ದೊರೆಯಬೇಕೆಂಬ ಆಸೆ ಇರುವವರು , ಐಶ್ವರ್ಯವಂತರು ಆಗ ಬೇಕೆಂಬ ಬಯಕೆ ಇದೆಯೇ, ನರಕದ ಮೇಲಿನ ಸ್ವಿರಾತ್  ಸೇತುವೆ ದಾಟುವಾಗ ಅತ್ಯುಜ್ವಲ  ಬೆಳಕು ಬೇಕಾದವರು, ದಾನ-ಧರ್ಮ ಕೊಡಬೇಕೆಂಬ ಅತ್ಯಾಸೆ ಉಳ್ಳವರು,( ಕೊಡಲಿಕ್ಕೆ ಅವರ ಬಳಿ ಹಣ ಇಲ್ಲ) ಯಥೇಷ್ಟ ದಾನಧರ್ಮ ಮಾಡಿದ ಕೂಲಿ ಸಿಗಲು, ರೌಲಾ ಷರೀಫ್ ಝಿಯಾರತ್ ಮಾಡುವ ಸೌಭಾಗ್ಯ ದೊರೆಯಲು. ಪರಲೋಕದಲ್ಲಿ ಅಪಾರ ಪುಣ್ಯ ದೊರೆಯಲು. ಇಹ ಲೋಕದ ಎಲ್ಲ ಉದ್ದೇಶಗಳು ಈಡೇರಲು. ಕಷ್ಟ ದುಃಖ . ರೋಗರುಜಿನಗಳು ಶಮನ ಆಗಲು,
ಭಯ ನಿವಾರಣೆಯಾಗಲು.
ಬೇಸರ ದೂರವಾಗಲು,
ಮುಂತಾದ ಎಲ್ಲ ಕಷ್ಟಗಳಿಂದ ಪಾರಾಗಲು,
ಒಳ್ಳೆಯ ಸತ್ ಸ್ವಬಾವಿಗಳಾಗಲು.
ಈಮಾನ್ ಜಾಸ್ತಿ ಆಗಲು,
ಹೃದಯ ಶುದ್ಧಿಯಾಗಲು,
ಬಡತನ ದೂರವಾಗಲು,
ಸಾವಿರಕ್ಕೂ ಮಿಕ್ಕಿದ ರಹಸ್ಯಗಳನ್ನು ಇರುವ,
"ತವಸ್ಸುಲ್ ಹೊಂದಿರುವ, ನಮ್ಮ ಉದ್ದೇಶಗಳನ್ನು ಎತ್ತಿ ಹೇಳುವ , ಅಲ್ಲಾಹನ ನಿಧಿ. ಎಂಬ ನಾಮ ವಿರುವ, ಅಲ್ಲಾಹನ ಖಜಾನೆಗಳ ಕೀಲಿಕೈ ಯಾಗಿರುವ ಮಹತ್ವವಾದ ಒಂದು ಸ್ವಲಾತ್ ಆಗಿದೆ *ಸ್ವಲಾತುನ್ನಾರಿಯತ್* ಎಂಬ ಹೆಸರಾದ ಈ ಸ್ವಲಾತ್ ಮೊರಕ್ಕೊದ ಮುಸ್ಲಿಮರು ಹೆಚ್ಚಾಗಿ ಸಂಕಷ್ಟ ನಿವಾರಣೆಗೆ, ಉದ್ದೇಶ ಸಾಫಲ್ಯತೆಗೆ ಬಳಸುತ್ತಾರೆ  ಹೇಳುವವನಿಗೆ ಮೇಲಿನ ಎಲ್ಲಾ ಲಾಭಗಳು ದೊರೆಯುವುದಲ್ಲದೆ 4444 ಬಾರಿ  ಯಾವುದೇ ಉದ್ದೇಶ ವಿಟ್ಟುಕೊಂಡು ಹೇಳಿದರೆ ಖಂಡಿತ ಹೇಳಿ ಮುಗಿಯುವುದರೊಳಗಾಗಿ ಆ ಉದ್ದೇಶ ಈಡೇರುವುದು ಅಪ್ಪಟ ಸತ್ಯವೆಂದು ಇಮಾಮ್ ಕುರ್ ತುಬಿ( ರ) ಹೇಳಿದ್ದಾರೆ

ಸ್ವಲಾತ್ ಈ ಕೆಳಗೆ ನೀಡಲಾಗಿದೆ👇👇👇

☪ *اَللَّهُمَّ صَلِّ صَلاَةً كَامِلَةً وَسَلِّمْ سَلاَماً تَامًّا عَلَى سَيِّدِنَا مُحَمَّد ٍالذي تَنْحَلُّ بِهِ الْعُقَدُ وَتَـنْفَرِجُ بِهِ الْكُرَبُ وَتُـقْضَى بِهِ الْحَوَائِجُ وَتُنَالُ بِهِ الرَّغَائِبُ وَحُسْنُ الْخَوَاتِمِ وَيُسْتَسْقَى الْغَمَامُ بوَجْهِهِ الْكَرِيمِ وَعَلى آلِهِ وَصَحْبِهِ فِي كُـلِّ لَمْحَةٍ وَنَفَسٍ بِعَدَدِ كُـلِّ مَعْلُومٍ لَكْ*

*ಅಲ್ಲಾಹುಮ್ಮ ಸ್ವಲ್ಲಿ ಸ್ವಲಾತನ್ ಕಾಮಿಲತನ್ ವಸಲ್ಲಿಮ್ ಸಲಾಮನ್ ತಾಮ್ಮನ್ ,ಅಲಾ ಸಯ್ಯಿದಿನಾ ಮುಹಮ್ಮದಿನಿಲ್ಲದ್ಝಿ ತನ್ ಹಲ್ಲು  ಬಿಹಿಲ್ ಉಕ್ವದ್  ವತನ್ ಫರಿಜು ಬಿಹಿಲ್ ಕುರಬು ವತುಕ್ವುಲ್ವಾ ಬಿಹಿಲ್ ಹವಾಇಜು  ವತುನಾಲು ಬಿಹಿರ್ರಗಾಯಿಬು ಬಹುಸುನುಲ್ ಖವಾತಿಮಿ ವಯುಸ್ತಕ್ವಲ್ ಗಮಾಮು ಬಿವಜಿಹಿಹಿಲ್ ಕರೀಮ್, ವಅಲಾ ಆಲಿಹೀ ವಸ್ವಬ್ಬಿಹೀ ಫೀ ಕುಲ್ಲಿಲಮ್ ಹತಿನ್ ವನಫ್ ಸಿನ್ ಬಿಅದದ ಕುಲ್ಲಿ ಮಆಲೂಮಿಲ್ಲಕ್...*
🌿🌿🌿🌿🌿🌿🌿🌿🌿*ಅರ್ಥ*👇👇👇
ಅಲ್ಲಾಹನೇ ಪರಿಪೂರ್ಣವಾದ ಕರುಣೆಯನ್ನೂ, ಹಾಗೂ ಪರಿಪೂರ್ಣವಾದ ರಕ್ಷೆಯನ್ನೂ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಮೇಲೆ ನೀನು ವರ್ಷಿಸು.
  ಆ ನಬಿ ಸ್ವಲ್ಲಲ್ಲಾಹು ಅಲೈಹಿವ  ಸಲ್ಲಮ್ ರವರ ಕಾರಣ ಎಲ್ಲಾ ಕ್ಲೇಶಗಳೂ ಪರಿಹಾರವಾಗುವುದು. ಎಲ್ಲಾ ಕಷ್ಟಗಳೂ ತೊಲಗುವುದು, ಎಲ್ಲಾ ಅವಶ್ಯಕತೆ ಗಳೂ ಈಡೇರುವುದು ,  ಎಲ್ಲಾ ಆಗ್ರಹಗಳು ಸಫಲೀಕರಣವಾಗುವುದು, ಎಲ್ಲಾ ಕಾರ್ಯಗಳ ಪರ್ಯಾವಸಾನವು ಹಸನುಗೊಳ್ಳುವುದು,
  ಅವರ ಪಾವನ ಮುಖ ದರ್ಶನದಿಂದ ಮಳೆಯನ್ನು ವರ್ಷಿಸುವುದು,
    ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಕುಟುಂಬದ ಮೇಲೂ , ಅನುಚರರ ಮೇಲೂ ಕರುಣೆ ಹಾಗೂ ರಕ್ಷೆ ವರ್ಷಿಸುತ್ತಾ  ಇರಲಿ ಪ್ರತಿಯೊಂದು ಕ್ಷಣದಲ್ಲೂ ಪ್ರತಿಯೊಂದು ಶ್ವಾಸದಲ್ಲೂ ಅಲ್ಲಾಹನ ಅರಿವಿನ ಸಂಖ್ಯೆಯಷ್ಟು....
🌿🌿🌿🌿🌿🌿🌿🌿✒ *ಅಬೂ ಆಶಿಕ್*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...