ಹದ್ದಾದ್ ರಾತೀಬ್ ಮತ್ತು ಸಲಫಿಯ ಜಹಾಲತ್
🌷🌷🌷🌷🌷🌷🌷🌷🌷🌷
✍ *ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ*
🌷🌷🌷🌷🌷🌷🌷🌷🌷🌷
ಸಲಪಿ ಹೇಳುವುದು ನೋಡಿ.
👇👇👇👇
*ಹದ್ದಾದ್ ರಾತೀಬ್ ಓದಬಾರದು. ಅದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ.*
ಇದು ಸಲಫಿಯ ಅಜ್ಞಾನದ ಪರಮಾವಧಿ ಯಲ್ಲದೆ ಇನ್ನೇನು ?
ನಾವು ಇಂದು ಕಾಣುವ ರೀತಿಯಲ್ಲಿರುವ ಪರಿಶುದ್ಧ ಖುರ್ ಆನ್ ಶರೀಫ್, ಹದೀಸ್ ಗ್ರಂಥ ವಾದ ಬುಖಾರಿ ಶರೀಫ್ ಸಹಿತ ಇರುವ ಹದೀಸ್ ಗ್ರಂಥ ಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ. ಹಾಗಾದರೆ ಅದು ಓದಬಹುದೇ ಎಂದು ಕೇಳಿದರೆ ಸಲಪಿ ಬ್ಬೆ ಬ್ಬೆ ಬ್ಬೆ ಎನ್ನುತ್ತಾನೆ.
*ಇಂದು ಕಾಣುವ ಖುರ್ ಆನ್ ಗ್ರಂಥ ಮತ್ತು ಹದೀಸ್ ಗ್ರಂಥಗಳು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ ನಿಜ. ಆದರೆ, ಅದರಲ್ಲಿ ರುವ ವಿಷಯಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿತ್ತು. ಅದನ್ನು ಜನರಿಗೆ ಓದಲು ಮತ್ತು ಕಲಿಯಲು ಸುಲಭ ಗೊಳಿಸಲು ಗ್ರಂಥ ರೂಪಕ್ಕೆ ಇಳಿಸಲಾಯಿತು.*
ಅದೇ ರೀತಿ ಹದ್ದಾದ್ ರಾತೀಬ್ ಕೂಡ. ಹದ್ದಾದ್ ರಾತೀಬ್ ಎಂಬ ಗ್ರಂಥ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ. ಆದರೆ ಅದರಲ್ಲಿರುವ ವಿಷಯಗಳೆಲ್ಲವೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇದ್ದವು.
ಹದ್ದಾದ್ ರಾತೀಬ್ ನಲ್ಲಿ ಏನಿದೆ ನೋಡೋಣ.
👉 *ಖುರ್ಆನ್*
👉 *ಹದೀಸ್ ನಲ್ಲಿ ವರದಿಯಾದ ದ್ಸಿಕ್ರ್*
👉 *ದುಆ*
ಖುರ್ ಆನ್ ಮತ್ತು ದ್ಸಿಕ್ರ್ ಪ್ರವಾದಿ ಸ್ವಲ್ಲಲ್ಲಾಹು ಕಾಲದಲ್ಲೇ ಇತ್ತು. ಅದನ್ನು ಕ್ರೋಢೀಕರಿಸಿ ಓದಲು ಸುಲಭ ವಾಗುವಂತೆ ಇಮಾಮ್ ಹದ್ದಾದ್ ರಳಿಯಲ್ಲಾಹು ಅನ್ಹು ರವರು ಗ್ರಂಥ ರೂಪವಾಗಿ ರಚಿಸಿ ಅದಕ್ಕೆ ಹದ್ದಾದ್ ಎಂದು ಹೆಸರಿಟ್ಟರು.
*ಖುರ್ ಅನ್ ಗ್ರಂಥ ರಚಿಸಿ ಉಸ್ಮಾನ್ ರಳಿಯಲ್ಲಾಹು ಅನ್ಹು ರವರು ರಸ್ಮುಲ್ ಉಸ್ಮಾನಿ ಎಂದು ಹೆಸರಿಟ್ಟಾಗೆ, ಹದೀಸ್ ಗ್ರಂಥ ರಚಿಸಿ ಇಮಾಮ್ ಬುಖಾರಿ ಯವರು ಹದೀಸ್ ಬುಖಾರಿ ಎಂದು ಹೆಸರಿಟ್ಟ ಹಾಗೆ ಹದ್ದಾದ್ ರಳಿಯಲ್ಲಾಹು ಅನ್ಹು ರವರು ಹದ್ದಾದ್ ರಾತೀಬ್ ರಚಿಸಿ ಅದಕ್ಕೆ ಹದ್ದಾದ್ ಎಂದು ಹೆಸರಿಟ್ಟರು.*
ಇದನ್ನು ಅರ್ಥಮಾಡಲು ಸಾಧಾರಣ ಬುದ್ಧಿ ಸಾಕು.ಒಳಿತಿಗೆ ಸದಾ ವಿರುದ್ಧ ಮಾತನಾಡುವ ಸಲಪಿ ಇಲ್ಲಿಯೂ ಅದೇ ಬುದ್ಧಿ ಯನ್ನು ತೋರಿಸಿದ್ದಾನೆ." ಹದ್ದಾದ್ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಇರಲಿಲ್ಲ." ಹದ್ದಾದ್ ವಿರೋಧಿ ಸುವ ತರಾತುರಿಯಲ್ಲಿ ಸಲಪಿ ತನ್ನ ಅಜ್ಞಾನವನ್ನು ಇಲ್ಲಿ ಅನಾವರಣ ಮಾಡಿದ್ದಾನಷ್ಟೇ.
➖➖➖➖➖➖➖➖➖➖
🌹🌳🌹🌳🌹🌳🌹🌳🌹🌳🌹
➖➖➖➖➖➖➖➖➖➖
Comments