Skip to main content

ಮೌಲಿದ್ ಏಕೆ...

ಮೌಲಿದ್ ಏಕೆ...

   💥 *ಮೌಲಿದ್ ಓದುವುದರ ಉದ್ದೇಶವೇನು..? ಇದರಿಂದ ಆಧ್ಯಾತ್ಮಿಕತೆ ಪಡೆಯುವುದು ಹೇಗೆ ಸಾಧ್ಯ..? ವಿವರಿಸುವಿರಾ...?*

➡ ಯಾರ ಮೌಲಿದ್ ಓದಲಾಗುತ್ತದೆಯೋ ಅವರ ಸ್ತುತಿ ಕೀರ್ತನೆಯನ್ನು ಹೇಳುವುದಾಗಿದೆ ಮೌಲಿದ್ ಪಾರಾಯಣದ ಉದ್ದೇಶ.

      ಪ್ರವಾದಿ ಮುಹಮ್ಮದ್ ﷺ ರವರ ಮೌಲಿದ್ ಪಾರಾಯಣದಲ್ಲಿ ಅವರ ಜನನ ಮತ್ತು ಆ ಸಂದರ್ಭದಲ್ಲಿ ನಡೆದ ಘಟನೆಗಳು, ಅವರ ವಿಶೇಷ ಸ್ವಭಾವ ಗುಣಗಳು, ಅವರನ್ನು ಪ್ರೀತಿಸುವುದರಿಂದುಂಟಾಗುವ ಒಳಿತುಗಳು, ಪಾರತ್ರಿಕ ಪುಣ್ಯಗಳು, ಅವರ ಜೀವನ ಸಂದೇಶಗಳು ಹೀಗೆ ಪ್ರವಾದಿ ﷺ ರವರ ಬಗ್ಗೆಯಿರುವ ಅನೇಕಾನೇಕ ವಿಷಯಗಳನ್ನು ಹೇಳಲಾಗುತ್ತದೆ. ಇದನ್ನು ಓದುವಾಗಲೂ, ಓದಿದ್ದನ್ನು ಆಲಿಸಿ ಅರ್ಥೈಸುವಾಗಲೂ ಆ ಪವಿತ್ರ ಜೀವನ ಸಂದೇಶಗಳು ಸತ್ಯ ವಿಶ್ವಾಸಿಗಳಿಗೆ ಫಲವನ್ನು ನೀಡುತ್ತದೆ. ಹಾಗೂ ಪ್ರವಾದಿ ﷺ ರವರ ಪವಿತ್ರವಾದ ವ್ಯಕ್ತಿತ್ವದೊಂದಿಗೆ ಮಾನಸಿಕ ನಿಕಟತೆಯುಂಟಾಗಿ ಅದು ಜೀವನದಲ್ಲಿ ಪ್ರಭಾವವನ್ನು ಬೀರಲು ಸಾಧ್ಯವಾಗುತ್ತದೆ. ಅಲ್ಲಾಹನು ತನ್ನ ಅತೀ ನಿಕಟರಾದ ಪ್ರವಾದಿ ﷺ ರವರ ಸ್ತುತಿ ಕೀರ್ತನೆಗಳನ್ನು ಹೇಳುವುದನ್ನು ಇಷ್ಟಪಡುತ್ತಾನೆ. ಹಾಗೂ ಅದಕ್ಕೆ ಪುಣ್ಯ ಫಲಗಳನ್ನು ನೀಡುತ್ತಾನೆ. ಮೌಲಿದ್ ನ ಸಭೆಗಳಲ್ಲಿ ಇಂತಹಾ ಸ್ತುತಿ ಕೀರ್ತನೆಗಳು, ಗುಣಗಾನಗಳು, ಸ್ವಲಾತ್ ಗಳು ಧಾರಾಳವಾಗಿ ಇರುತ್ತದೆ. ಇವೆಲ್ಲವೂ ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಗೂ ಪಾರತ್ರಿಕ ಪುಣ್ಯಗಳ ಸಮಾಹಾರಕ್ಕೂ ಉತ್ತಮ ಹಾದಿಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೇ..?

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...