_ಆಡುವ ಮಾತಿನಲ್ಲಿ ಸೂಕ್ಷ್ಮತೆಯಿರಲಿ._
*ಒಂದೇ ಒಂದು ಮಾತಿನಿಂದ ಅವನ ಎಲ್ಲಾ ಇಬಾದತ್ಗಳು ನಶಿಸಿ ಹೋದವು....⏬⏬*
( ಆತ್ಮೀಯ ಸ್ನೇಹಿತರಿಬ್ಬರ ಜೀವನದ ಕಥೆ ಪ್ರಸಂಗದ ಕೊಡೆಯಿಂದ ನಿಮ್ಮ ಮುಂದೆ. )
✒ *ರಜಬ್ ನಾವುಂದ (ಜ್ಞಾನದಾಹಿ)*
_( ಬದಲಾಗುವವರಿಗೆ ಇದರಲ್ಲೊಂದು ಬದಲಾವಣೆಯ ಪಾಠವಿದೆ. ಸಮಯವನ್ನು ತೆಗೆದಿಟ್ಟು ಒಮ್ಮೆ ಓದಿ ನೋಡಿ.)_
_ಚಿಕ್ಕಂದಿನಿಂದಲೇ ಇವರಿಬ್ಬರು ಸ್ನೇಹಿತರು ಎಲ್ಲಾ ವಿಷಯಗಳಲ್ಲಿ ಆತ್ಮೀಯವಾಗಿ ಬೆರೆತು ಕೊಂಡು ಬೆಳೆದು ಬಂದವರಾಗಿದ್ದರು. ಅದರಲ್ಲಿ ಒಬ್ಬನು ತನ್ನ ಜೀವನ ಶೈಲಿಯನ್ನು ಆಲ್ಲಾಹನ ದೀನಿನ ಮಾರ್ಗದಲ್ಲಿ ತೊಡಗಿಸಿಕೊಂಡು ಬಂದವನಾಗಿದ್ದು. ಸದಾ ಸಮಯ ಅಲ್ಲಾಹನನ್ನು ಸ್ಮರಿಸುತ್ತಾ , ಅಲ್ಲಾಹನು ನೀಡಿದ ಅನುಗ್ರಹಕ್ಕೆ ಸ್ಥುತಿಸುತ್ತಾ ದೀನಿನ ಪಾದದಡಿಯಲ್ಲಿ ತನ್ನ ಜೀವನವನ್ನು ರೂಪಿಸಿಕೊಂಡವನಾಗಿದ್ದ._
_ಇನ್ನೊಬ್ಬನು ಅವನಿಗೆ ವಿರುದ್ಧವಾಗಿ ಪೋಲಿ ಜೀವನವನ್ನು ಮೈಗೂಡಿಸಿಕೊಂಡು ನಡೆಯುತ್ತ ಅನಾಚಾರ ಅಕ್ರಮಗಳಲ್ಲಿ ತೊಡಗಿಸಿಕೊಂಡು ನಮಾಝ್ , ವೃತ , ಪುಣ್ಯ ಕಾರ್ಯಗಳನ್ನು ಯಾವುದನ್ನು ಮೈಗೂಡಿಸಿಕೊಳ್ಳದೇ ಅವೆಲ್ಲವನ್ನು ನಿರ್ಲಕ್ಷ್ಯಿಸಿ ಅನಾಚಾರಗಳಲ್ಲಿಯೇ ಸಾಗುತ್ತ ನೆಡೆಯುತ್ತಿರುವವನಾಗಿದ್ದನು._
_ಒಳ್ಳೆಯ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದ ಸ್ನೇಹಿತನು ತನ್ನ ಆತ್ಮೀಯ ಗೆಳೆಯನ ಬಳಿ ದೈನಂದಿನವಾಗಿ ಒಳ್ಳೆಯ ಉಪಚಾರವನ್ನು ನೀಡುತ್ತಾ , ಅಲ್ಲಾಹನಿಗೆ ವಿಧೇಯನಾಗಿ ಜೀವಿಸು , ಜೀವನದಲ್ಲಿ ಉತ್ತಮ ಕಾರ್ಯಗಳನ್ನೇ ಮಾಡು , ಅನಾಚಾರಗಳಲ್ಲಿ ಭಾಗಿಯಾಗದೆ ಒಳ್ಳೆಯನಾಗಿ ಜೀವನ ರೂಪಿಸು ಎಂದು ಅವನಿಗೆ ತಿಳಿ ಹೆಳುತ್ತಲೇ ಇದ್ದನು._
_ಆದರೆ ಕೆಟ್ಟ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದ ಸ್ನೇಹಿತನು ಅದೆಲ್ಲದಕ್ಕೂ ಒಂದೇ ಉತ್ತರ ನೀಡುತ್ತಾ. *ನನಗೆ ನನ್ನ ಕಾರ್ಯವನ್ನು ನೋಡಲು ಅಲ್ಲಾಹನಿದ್ದಾನೆ.* ಎಂಬ ಉತ್ತರವನ್ನು ನೀಡುತ್ತಾ ಅವನ ಎಲ್ಲಾ ಸಂದೇಶಗಳಿಗೆ ಈ ಮಾತನ್ನು ನೀಡುತ್ತಾ ಬರುತ್ತಿದ್ದನು._
_ಹೀಗೆ ಇವರಿಬ್ಬರು ಆತ್ಮೀಯರಾಗಿಯೇ ಬೆಳೆದು ಬರುತ್ತಾ ಇವನು ಅವನಿಗೆ ಉತ್ತಮ ಸಂದೇಶ ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದು ಅವನು ಇವನಿಗೆ *ತನಗೆ ಅಲ್ಲಾಹನಿದ್ದಾನೆ ಎಲ್ಲಾ ಕಾರ್ಯಗಳನ್ನು ನೋಡುತ್ತಾ.* ಎಂದು ಹೇಳುತ್ತಾ ತಾಕಿತು ಮಾಡುತ್ತಾ ಬರುತ್ತಿದ್ದನು._
_ಹೀಗೆ ದಿನಗಳುರುತ್ತಾ ಒಂದು ದಿನ ಒಳ್ಳೆಯ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದ ಸ್ನೇಹಿತನು ತನ್ನ ಆತ್ಮೀಯ ಗೆಳೆಯನು ಮಾಡುವ ಅನಾಚಾರದ ಕೆಲಸವನ್ನು ಕಣ್ಣೆದುರು ನೋಡುತ್ತಾನೆ. ಇಷ್ಟು ದಿನ ಅವನು ಅನಾಚಾರದಲ್ಲಿ ಭಾಗಿಯಾಗಿರುವುದನ್ನು ಮಾತ್ರ ತಿಳಿದಿದ್ದು; ಅವನು ಮಾಡುವ ಅನಾಚಾರವನ್ನು ನೋಡಿರಲಿಲ್ಲ. ಈಗ ಅವನು ನೋಡಿ ತನ್ನ ಆತ್ಮೀಯ ಗೆಳೆಯನಿಗೆ ಹೇಳುತ್ತಾನೆ. *ನೀನು ಮಾಡುವ ಈ ಅನಾಚಾರವನ್ನು ಎಂದಿಗೂ ಅಲ್ಲಾಹನು ಕ್ಷಮಿಸಲಾರನು.* ಎಂದು ಅವನಿಗೆ ಹೇಳುತ್ತಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅನಾಚಾರದಲ್ಲಿ ಭಾಗಿಯಾಗಿರುವ ಸ್ನೇಹಿತನು ತನ್ನ ಆತ್ಮೀಯ ಗೆಳೆಯನಲ್ಲಿ ಅದೇ ಹೇಳುತ್ತಾನೆ. *ನನ್ನ ಕಾರ್ಯದ ಬಗ್ಗೆ ನೀನು ಯೋಚಿಸಬೇಡ. ನನಗೆ ಅಲ್ಲಾಹನಿದ್ದಾನೆ.* ಎಂದು ಹೇಳಿ ಇಬ್ಬರೂ ಅಲ್ಲಿಂದ ಬೇರ್ಪಡುತ್ತಾರೆ._
_ಇವರಿಬ್ಬರ ಭೂಲೋಕದ ಜೀವನವನ್ನು ಕೊನೆಯಾಗಿಸಿ, ಪರಲೋಕದ ಜೀವನಕ್ಕಿರುವ ಯಾತ್ರೆ ಹೊರಡುತ್ತಾರೆ. ( ಇಬ್ಬರ ಮರಣದ ನಂತರ )_
_ಇವರಿಬ್ಬರ ವಿಚಾರಣೆ ನಡೆಯುವ ಸಂದರ್ಭದಲ್ಲಿ ಭೂಲೋಕದಲ್ಲಿ ಅಲ್ಲಾಹನ ಮಾರ್ಗದಲ್ಲಿ ಜೀವನ ತೊಡಗಿಸಿಕೊಂಡವನು ನರಕದಲ್ಲಿಯೂ , ಅನಾಚಾರಗಳಲ್ಲಿ ಭಾಗಿಯಾಗಿರುವ ಅವನ ಆತ್ಮೀಯ ಗೆಳೆಯನಾದವನು ಸ್ವರ್ಗದಲ್ಲಿಯೂ ಆಗಿರುತ್ತಾರೆ._
_ಅಲ್ಲಾಹನ ಮಾರ್ಗದಲ್ಲಿ ಜೀವನ ತೊಡಗಿಸಿಕೊಂಡವನು ನಾನು ನರಕಕ್ಕೆ ಹೋಗಲು , ಅನಾಚಾರಗಳಲ್ಲಿ ಭಾಗಿಯಾಗಿರುವ ನನ್ನ ಸ್ನೇಹಿತ ಸ್ವರ್ಗವನ್ನು ಪಡೆಯಲು ಕಾರಣವನ್ನು ಕೇಳಿದಾಗ; ಅಲ್ಲಾಹನು ಹೇಳುವನು; ನಿನ್ನ ಆತ್ಮೀಯ ಗೆಳೆಯ ಅನಾಚಾರದಲ್ಲಿ ಭಾಗಿಯಾಗಿರುವುದನ್ನ ಕಂಡಾಗ ನೀನು *ಅಲ್ಲಾಹನು ಎಂದಿಗೂ ನಿನ್ನನ್ನು ಕ್ಷಮಿಸಲಾರನು* ಎಂದು ಆಡಿದ ಮಾತಿನಿಂದಾಗಿದೆ. ನೀನು ನರಕಕ್ಕೆ ಹೋಗಲು ಕಾರಣ. *ಆ ಸಮಯದಲ್ಲಿ ನಿನ್ನ ಎಲ್ಲಾ ಅಮಲುಗಳು ನಿನ್ನ ಸ್ನೇಹಿತನಿಗೂ , ನಿನ್ನ ಸ್ನೇಹಿತನು ಮಾಡಿದ ಎಲ್ಲಾ ಪಾಪಗಳು ನಿನ್ನ ಮೇಲೆ ವಿಧಸಲ್ಪಟ್ಟಿತ್ತು. ಎಂದು*_
_ಕೇವಲ ಒಂದು ಒಂದೇ ಮಾತಿನಿಂದ ಅವನ ಎಲ್ಲಾ ಕರ್ಮಗಳೂ ಕಡಿದು ಹೋಗಿವೆ ಎಂದಾದರೆ; ನಾವು ಚಿಂತಿಸಬೇಕಾಗಿದೆ. ಸೋಶಿಯಲ್ ಮೀಡಿಯಾ ಬಳಕೆ ಮಾಡುವವರು ಅದೆಷ್ಟು ಬಾರಿ ಆಲಿಮ್ಗಳ ಬಗ್ಗೆ ಸೈಯಿದ್ ಕುಟುಂಬದ ಕಣ್ಮಣಿಗಳ ಬಗ್ಗೆ ಫಿತ್ನ ಫಸಾದ್ ಮಾಡುತ್ತಾ , ಅವರ ಹಸಿ ಮಾಂಸವನ್ನು ಬಕ್ಷಿಸುವ ಯುವ ಸಮೂಹವೇ ಚಿಂತಿಸಬೇಕಾಗಿದೆ._
*ನಾವು ಮಾಡಿರುವ ಸಾಸಿವೆ ಕಾಳಿನಷ್ಟಿರುವ ಅಮಲನ್ನು ಇನ್ನೊಬ್ಬರಿಗೆ ನೀಡಿ ನಮ್ಮ ಈಮಾನನ್ನು ನಷ್ಟ ಪಡಿಸಿಕೊಳ್ಳದಿರೋಣ.*
_ಅಲ್ಲಾಹು ನಮ್ಮೆಲ್ಲರನ್ನು ಅವನ ಇಷ್ಟ ದಾಸರಲ್ಲಿ ಒಂದುಗೂಡಿಸಲಿ. ಮರಣದ ಸಮಯದಲ್ಲಿ ಈಮಾನಿನೊಂದಿಗೆ ಮರಣ ಹೊಂದಲು ತೌಫಿಕ್ ನೀಡಿ ಅನುಗ್ರಹಿಸಲಿ._
ದುಆ ಇರಲಿ ಸದಾ......
✒ *ರಜಬ್ ನಾವುಂದ (ಜ್ಞಾನದಾಹಿ)*
_ಹೇಳಿರಿ ನಬಿ ﷺ ರವರ ಮೇಲೆ ಮೂರು ಸ್ವಲಾತ್ ........_
📿☪📿 *صَـلــُّوا عَـلَـى النَّبِيِّ ﷺ وَآلـِهِ * اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله* 📿☪📿
Comments