Skip to main content

ಸಹನಶೀಲೆ ಮಹಿಳೆ


         *ಸಹನಶೀಲತೆಗೆ ಉತ್ಕೃಷ್ಟ ಉದಾಹರಣೆಯಾಗಿ ನಾವು ಉಮ್ಮುಸುಲೈಮಾನ್(ರ) ರವರನ್ನು ಪರಿಗಣಿಸಬಹುದಾಗಿದೆ.ಅವರ ಮಗು ಮರಣ ಹೊಂದಿತು. ಅವರ ಪತಿ ಅಬುತ್ವಲಾಹ್ ಸ್ಥಳದಲ್ಲಿರಲಿಲ್ಲ. ಅವರಿಗೆ ಸಮಾಧಾನಪಡಿಸಲು ಬೇರೆ ಯಾರು ಕೂಡಾ ಅಲ್ಲಿರಲಿಲ್ಲ. ಅವರು ನಿಯಂತ್ರಣ ಕಳೆದುಕೊಳ್ಳದೆ, ತಾಳ್ಮೆವಹಿಸಿಕೊಂಡು ಪರಿಸ್ಥಿತಿಯನ್ನು ಎದುರಿಸಿದರು. ಸ್ವಂತಃ ಅವರೇ ತನ್ನ ಸ್ವಂತ ಕರುಳಿನ ಕುಡಿಯ ಜನಾಝವನ್ನು ಸ್ನಾನ ಮಾಡಿಸಿದರು. ಬಳಿಕ ಅದನ್ನು ಮನೆಯ ಒಂದು ಮರೆಯಲ್ಲಿ ಮಲಗಿಸಿ ಬಿಟ್ಟರು. ಪತಿ ಮರಳಿ ಬಂದಾಗ ಎಂದಿನ ಶೈಲಿಯಲ್ಲೇ ಆತ್ಮೀಯವಾಗಿ ಸ್ವೀಕರಿಸಿಕೊಂಡರು. ಅವರ ಅವಶ್ಯಕತೆಗಳನ್ನೆಲ್ಲಾ ನಿರ್ವಹಿಸಿದರು. ಬಳಿಕ ಶಾಂತಿ ಮತ್ತು ಸಮಾಧಾನದಿಂದ ಘಟಿಸಿದ ಆ ಸ್ಪೋಟಕ ಘಟನೆಯನ್ನು ಅವರೊಂದಿಗೆ ಹೇಳಿದರು. ವಿಷಮ ಪರಿಸ್ಥಿತಿಯಲ್ಲೂ ದೃತಿಗೆಡದೆ ಶಾಂತ ಚಿತ್ತದಿಂದ ಆಘಾತವನ್ನು ಸಹಿಸಲು ಸಹನೆವಹಿಸಲು ಉಮ್ಮು ಸುಲೈಮಾನ್(ರ)ರಂತಹಾ ಸತ್ಯ ವಿಶ್ವಾಸಿನಿಯರಿಗೆ ಮಾತ್ರ ಸಾಧ್ಯವೆನ್ನುವುದನ್ನು ಸ್ತ್ರೀಯರೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಈ ಸಹನಾಮಯಿಯ ಕುರಿತು ಪ್ರವಾದಿ(ಸ) ಹೇಳುತ್ತಿದ್ದರು. "ನಾನು ಸ್ವರ್ಗದಲ್ಲಿ ಪ್ರವೇಶಿಸಿದಾಗ ನನ್ನ ಮುಂದಿನಿಂದ ಪಾಪದ ಸಪ್ಪಳವೊಂದು ಕೇಳಿಕೊಂಡೆ. ಅದು ರುಮೇಜ್ಹಾ ಬಿಂತ್ ಮುಲಿಹಾ(ಉಮ್ಮುಸುಲೈಮಾನ್)(ರ)ರವರದ್ದಾಗಿತ್ತು. (ಬುಖಾರಿ-ಮುಸ್ಲಿಂ) ಇಂತಹಾ ಘಟನೆ ಮತ್ತು ಪ್ರಸ್ತಾಪಗಳಿಂದ ವಿಷಯವನ್ನು ಮನವರಿಕೆ ಮಾಡಿಕೊಂಡು ತನ್ನ ಜೀವನವನ್ನು ಇಸ್ಲಾಮಿನ ರೀತಿ-ನೀತಿಗನುಸಾರ ಮುನ್ನಡೆಸಲು ಸಾದ್ಯವಾದಾಗಲೇ ಅವಳು ತನ್ನ ಮಕ್ಕಳಿಗೆ, ಕುಟುಂಬಸ್ಥರಿಗೆ, ನೆರೆಹೊರೆಯವರಿಗೆ ಮಾದರಿ ಯೋಗ್ಯ ನಾರಿಯಾಗಿ ಮಾರ್ಪಡುತ್ತಾಳೆ. ನೆರೆಹೊರೆ ಸಂಬಂಧವನ್ನು ಬಲಪಡಿಸುವುದರಲ್ಲಿ ಸ್ತ್ರೀಯರಿಗೆ ಮಹತ್ವದ ಪಾತ್ರವಿದೆ.*
     *ಇಸ್ಲಾಮ್ ನೆರೆಹೊರೆಯವರ ಹಕ್ಕು ಬಾಧ್ಯತೆಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಸತ್ಯ ವಿಶ್ವಾಸಿನಿಯಾದವಳು ತನ್ನ ಪತಿಯು ತನ್ನನ್ನು ನೋಡಿದಾಗ ಅವನನ್ನು ಸಂತೋಷಪಡಿಸುತ್ತಲೂ ಅವನ ಅನುಪಸ್ಥಿತಿಯಲ್ಲಿ ಆತನ ಮಕ್ಕಳು ಮತ್ತು ಸಂಪತ್ತನ್ನೂ ತನ್ನ ಚಾರಿತ್ರ್ಯವನ್ನೂ ಸಂರಕ್ಷಿಸಿಕೊಳ್ಳುವವಳೂ ಆಗಿರುತ್ತಾಳೆ ಎಂದು ಹೇಳಿದ ಪ್ರವಾದಿ(ಸ)ರವರ ಮಾತುಗಳನ್ನು ಅತ್ಯಂತ ಶ್ರದ್ದೆಯಿಂದ ಅವಲೋಕನ ನಡೆಸಬೇಕಾಗಿದೆ. ಇಸ್ಲಾಮಿನ ನೀತಿ-ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅಲ್ಲಾಹನನ್ನು ಭಯಪಟ್ಟುಕೊಂಡು ಜೀವಿಸಿದರೆ ಆತನ ಔದಾರ್ಯತೆಗೆ ಕೃತಜ್ಞತೆ ಪ್ರಕಟಿಸಿದಂತಾಗುತ್ತದೆ. ಅಲ್ಲಾಹು ಅನುಗ್ರಹಿಸಲಿ ಆಮೀನ್.*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...