Skip to main content

ನನ್ನ ಪ್ರವಾದಿ ﷺ ಸುಗಂಧವಾಗಿದ್ದರು

ಚರಿತ್ರೆ
📚📚📚📚📚📚📚
ನನ್ನ ಪ್ರವಾದಿ ﷺ ಸುಗಂಧವಾಗಿದ್ದರು
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
"ಆ ಪವಿತ್ರ ಜೀವನ ಹಾಗೂ ವಫಾತ್ತ್ ಅವರ ಮನಸ್ಸಿನ ಹಾಗೆಯೇ ಸುಗಂಧವಾಗಿತ್ತು"

ಮುತ್ತು ನಬಿ ﷺ ರವರ ಹೃದಯವನ್ನು ನೋಡಿದವರು ಎಷ್ಟು ಜನರಿದ್ದಾರೆ?

ಮಾತಾಪಿತರು ಇಲ್ಲದೆ ಬೆಳೆದ ಬಾಲ್ಯಕಾಲದ ರಾತ್ರಿಗಳಲ್ಲಿ ಪಿತೃವರ್ಯರಾದ ಅಬೂತ್ವಾಲಿಬಿನೊಂದಿಗೆ ಮಲಗುತ್ತಿರುವಾಗ..,

ಪಕ್ಕದ ಕೋಣೆಯಲ್ಲಿ ಅಬ್ದುಲ್ ಮುತ್ತಲಿಬಿನ ಮಗಳು ಅವರ ತಂದೆ ತಾಯಿಗಳೊಂದಿಗೆ ನಿದ್ರಿಸುತ್ತಿದಾಗ..,

ಒಂಟಿಯಾಗಿ ನಿದ್ರಿಸುತ್ತಿದ್ದ "ಮುಹಮ್ಮದ್" ﷺ
ಎಂಬ ಬಾಲಕನ ಕಣ್ಣುಗಳಿಂದ ಯಾರೂ ಕೂಡ ಕಾಣದೆ ಉದುರಿದ ಕಣ್ಣೀರು ನಾವು ಯಾರೂ ಕಂಡವರಲ್ಲ..

➖ತಿಳಿಯಿರಿ""

*"ಆ ಕಣ್ಣಿರಿನ ಒಂದೊಂದು ಬಿಂದುಗಳಿಗೂ ಸುಗಂಧದ ಪರಿಮಳವಿತ್ತು"*

ಕೋಟ್ಯಾಧಿಪತಿಯಾದ ಖದೀಜಾಬೀವಿ (ರ) ಅವನ್ನು ವಿವಾಹ ಮಾಡಿದಾಗ..

ರಾತ್ರಿಯ ಪ್ರಮಾಣಿಗಳ ಔತನ ಕೂಟದಲ್ಲಿ ಅಬೂಜಹಲ್ ಮತ್ತು ಸಂಗಡಿಗರು..
🌴ದರಿದ್ರರಾದ ಮುಹಮ್ಮದರನ್ನು ﷺ ಮಾತ್ರವಾ ಖದೀಜರಿಗೆ ರ. ಸಿಕ್ಕಿರುವುದು!!
ಎಂದು ಅಪಹಾಸ್ಯ ಮಾಡಿದಾಗ, ಅಭಿಮಾನವಾದ ಆ ಮುತ್ತು ಮಾಣಿಕ್ಯವನ್ನು ಬೆಂಬಲಿಸಿ ಖದೀಜ ಬೀವಿ ರ. ರವರು ಹೇಳಿದರು;
🌴ನನ್ನ ಪತಿ ದರಿದ್ರನಲ್ಲ, ನನ್ನ ಎಲ್ಲಾ ಸೊತ್ತಿನ ವಾರೀಸುದಾರರು ಮುಹಮ್ಮದವರಾಗಿದ್ದಾರೆ ﷺ ಎಂದು!!!!..

🌴ನಬಿ ﷺ ರವರ ಮನಸ್ಸಿನ *ಸುಗಂಧ* ಸಂಪೂರ್ಣವಾಗಿ ಅರಿತ ಖದೀಜ ಬೀವಿ (ರ) ರವರು, ಮುತ್ತು ನಬಿ ﷺಯವರಿಗೆ ಒಂದೇ ಸಮಯದಲ್ಲಿ ಪತ್ನಿಯು, ತಾಯಿಯು, ತಂದೆಯೂ ಆಗಿದ್ದರು.

ಖದೀಜ ರ. ರವರು ವಫಾತ್ತಾದಾಗ, ಹೆಣ್ಣು ಮಕ್ಕಳನ್ನು ತಬ್ಬಿ ಹಿಡಿದು ಅತ್ತ ರಾತ್ರಿಗಳಲ್ಲಿ..
🌴ನನ್ನ ಖದೀಜಾ.. ಎಂದು ಹೇಳಿ ಕಣ್ಣೀರಿಟ್ಟ ನಬಿ ﷺ ಯವರನ್ನು ನಾವು ತಿಳಿದಿಲ್ಲ.

""ಆ ಪವಿತ್ರ ನಬಿ ﷺ ರವರನ್ನು ತಿಳಿದಿರುವುದು ಮಗಳಾದ ಫಾತ್ತಿಮಾ ಬೀವಿ ರ. ಆಗಿದ್ದರು.

ಅದರಿಂದಲೇ ಮುತ್ತು ನಬಿ ﷺ ರವರನ್ನು ದಫನ್ ಮಾಡಿ ಬಂದವರೊಂದಿಗೆ..,
🌴ನಬಿ ﷺ ರವರ ಮಗಳು ಮಣ್ಣು ಹಾಕಲು ನಿಮಗೆ ಹೇಗೆ ಸಾಧ್ಯವಾಯಿತು?? ಎಂದು ಕೇಳಿ ಆ ಮಹದಿ ಕಣ್ಣೀರಿಟದ್ದು.
ಆರು ತಿಂಗಳು ಕಳೆದು ವಫಾತ್ತಿನವರೆಗೆ ಯಾರೊಂದಿಗೂ ಏನು ಮಾತನಾಡದೆ ಜೀವಿಸಿರುವುದು.

' ಅದಷ್ಟು ಬೇಗ ಮರಣ ಹೊಂದಿ ತಂದೆಯವರೊಂದಿಗೆ ಸೇರಲು ಆ ಪುತ್ರಿ ಆಗ್ರಹಿಸಿರುವುದು ಆ ಮನಸ್ಸಿನ *ಸುಗಂಧ* ಅರಿತಿರುವುದರಿಂದಾಗಿದೆ.

🌴ಆ *ಸುಗಂಧ ಪರಿಮಳ* ಸಿಕ್ಕಿದಾಗ ಆಗಿದೆ ಅಕ್ರಮಿಯಾಗಿದ್ದ ಉಮರ್ ರ. ಖಲೀಫಾ ಉಮರ್ ರ. ಆಗಿ ಬದಲಾಗಿರುವುದು.

🌴ಶತ್ರುಗಳು ಶಿಲುಬೆಗೆ ಹೇರಿಸಿ ಒಂದೊಂದು ಅಂಗಾಂಗಗಳನ್ನು ತುಂಡಿರಿಸುವಾಗಲು,
ನನಗಿದು ಸಮಸ್ಯೆ ಅಲ್ಲ, ಆದರೆ ನನ್ನ ನಬಿ ﷺ ಯವರ ಕಾಲಿನಲ್ಲಿ ಒಂದು ಮುಳ್ಳು ತರಚುವುದು ಕೂಡಾ ನನಗೆ ಸಹಿಸಲಿಕಾಗಲ್ಲ..!! ಎಂದು ಹೇಳಿದ ಖುಬೈಬ್ ರ. ರವರಿಗೆ ಶಕ್ತಿ ತುಂಬಿರುವುದು ಆ *ಸುಗಂಧ*ವಾಗಿತ್ತು.

🌴 ಉಹ್'ದ್ ಯುದ್ಧ ರಣಂಗದಲ್ಲಿ ನಬಿ ﷺ ರವರು ಕೊಲ್ಲಲ್ಪಟ್ಟರು ಎಂಬ ವಾರ್ತೆ ಕೇಳಿ ನಬಿ ﷺ ಯವರನ್ನು ಹುಡುಕಿಕೊಂಡು ನಡೆದ  ಸ್ತ್ರಿ, ತನ್ನ ಪತಿ, ಮಕ್ಕಳು ವಧಿಸಲ್ಪಟ ವಿವರ ತಿಳಿದೂ ಗಂಭೀರವಾಗದೆ..,
ನಬಿ ﷺ ರವರನ್ನು ಕಂಡಾಗ..!
ಯಾರು ಮರಣ ಹೊಂದಿದರೂ ನನಗೆ ತೊಂದರೆ ಇಲ್ಲ. ನಬಿ ﷺ ಯವರಿಗೆ ಏನು ಸಂಭವಿಸಲಿಲ್ಲವಲ್ಲವೇ
ಎಂದು ತಿಳಿದು ಆಶ್ವಾಸನೆ ಗೊಡಿರುವುದು ಆ *ಸುಗಂಧ*ದ ಪರಿಮಳದಿಂದಾಗಿತ್ತು.

🌴ಮುತ್ತು ನಬಿ ﷺ ರವರನ್ನು ನಮ್ಮ ಶರೀರಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿರಿ..

🌴ಮುತ್ತು ನಬಿ ﷺ ಯವರನ್ನು ಪ್ರೀತಿಸುವವರನ್ನು ಪ್ರೀತಿಸಿರಿ..

ಆ *ಸುಗಂಧ* ಎಲ್ಲಾ ಕಡೆ ಪಸರಿಸಲಿ.

ಆ *ಸುಗಂದ* ಪರಸ್ಪರ ಮೊಳಗಲಿ..

ಒಮ್ಮೆಯೂ ಮಾಯದೆ,
ಒಮ್ಮೆಯೂ ಮರೆಯದೆ,
ಬದಲಿ ಇಲ್ಲದ ಪ್ರಿಯ ನಬಿ ﷺ ಯವರ 🌷 *ಸುಗಂಧ* ಪ್ರಪಂಚವಿಡಿ ಪ್ರಕಾಶಿಸಲಿ....

صلي  الله  علي  محمد  💚  💔  صلى  الله  عليه  وسلم  ❤ 
صلي  الله  علي  محمد  💚  💛  صلي  الله  عليه  وسلم  ❤ 
صلي  الله  علي  محمد  💚  💔  صلى  الله  عليه  وسلم  ❤

✍ಗಫೂರ್ ಬಾಯಾರ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...