ನೂರುಲ್ ಉಲಮಾ ಎಂ. ಎ. ಉಸ್ತಾದ್ ಮಖಾಂ. ದೇಳಿ, ಕಾಲ್ನಾಡ್. ಕಾಸರಗೋಡು
➖➖➖➖➖➖➖ ಕಾಸರಗೋಡು ಜಿಲ್ಲೆಯ ತೃಕರಿಪ್ಪುರ್ ಪಂಚಾಯತ್ತಿನ ಉಡುಬುಂತಳ ಎಂಬ ಸ್ಥಳದಲ್ಲಿ ಕುರಿಯ ಅಬ್ದುಲ್ಲ ಹಾಜಿ, ಹಾಗೂ ನಲೂರಪ್ಪಾಡ್ ಮರ್ಯಂ ದಂಪತಿಗಳ ಮಗನಾಗಿ ಈ ಶತಮಾನಕ್ಕೆ ದೀನೀ ಜ್ಞಾನದ ಸೂರ್ಯ ಪ್ರಭೆ ಪಸರಿಸಿದ ಸಮಸ್ತದ ಸಾತ್ವಿಕರಾದ ಪಂಡಿತ ಶಿರೋಮಣಿ ಎಂ.ಎ. ಅಬ್ದುಲ್ ಖಾದಿರ್ ಉಸ್ತಾದ್ ನ:ಮ. ರವರು 1924 ಜುಲೈ 01ಕ್ಕೆ ( 1342 ರಜಬ್ 29 ) ಜನಿಸಿದರು.
ಅಬ್ದುಲ್ ಖಾದಿರ್ ಹಾಜಿ (ಅಜ್ಜ) ಅಹ್ಮದ್ ಮುಸ್ಲಿಯಾರ್ (ಮಾವ), ತೃಕರಿಪ್ಪುರ್ ಹಾಫಿಲ್ ಶಾಹುಲ್ ಹಮೀದ್ ತಂಗಳ್, ನಾದಾಪುರಂ ಶಿರಾಸಿ ಮುಸ್ಲಿಯಾರ್, ಕೊಯಪ್ಪ ಮುಹಮ್ಮದ್ ಕುಟ್ಟಿ ಮುಸ್ಲಿಯಾರ್, ಎನ್.ಸಿ. ಅಬ್ದುಲ್ ಖಾದಿರ್ ಮುಸ್ಲಿಯಾರ್, ಮೊದಲಾದ ಪಂಡಿತರಿಂದ ಮಹಾನವರು ವಿದ್ಯೆ ಕಲಿತರು.
ಎಝುಮಲ ಹಾಮಿದ್ ಕೋಯಮ್ಮ ತಂಗಳ್ ನ:ಮ, ಕೊಟ್ಟಾಯಂ ಶೈಖ್ ಅಬೂಬಕ್ಕರ್ ಮುಸ್ಲಿಯಾರ್ ನ:ಮ, ಚಾಪ್ಪನಂಗಾಡಿ ಬಾಪ್ಪು ಮುಸ್ಲಿಯಾರ್ ನ:ಮ, ಕಕ್ಕಡಿಪುರಂ ಅಬೂಬಕ್ಕರ್ ಮುಸ್ಲಿಯಾರ್ ನ:ಮ, ಪಾನಾಯಿಕುಳಂ ಅಬ್ದುರಹ್ಮಾನ್ ಮುಸ್ಲಿಯಾರ್ ನ:ಮ, ಚಾವಕ್ಕಾಡ್ ಮುಹಮ್ಮದ್ ಕುಂಞಿ ತಂಗಳ್ ನ:ಮ, ಈಸಾ ಚೆರುಕುಂಞಿ ಕೋಯ ತಂಗಳ್ ನ:ಮ, ಮುಂತಾದವರಿಂದ ತನ್ನ ದೀನೀ ಜ್ಞಾನ ಹಾಗು ಆತ್ಮೀಯ ಲೋಕವನ್ನು ವಿಕಾಸಗೊಳಿಸಿದರು.
ನಂತರ ತೃಕರಿಪ್ಪುರ್ ಮೆಟ್ಟಮ್ಮಲ್ ( 1949-73 ), ತಳಿಪ್ಪರಂಬ್ ಖುವ್ವತ್ತುಲ್ ಇಸ್ಲಾಂ ( 1973-78 ), ಉದಿನೂರ್ ( 78-79 ), ಜಾಮಿಅ ಸಅದಿಯ್ಯ ( 1979ರಿಂದ ತನ್ನ ವಫಾತಿನ ವರೆಗೆ) ದರ್ಸ್ ರಂಗದಲ್ಲಿ ಸೇವನೆಗೈದರು.
1946ರಲ್ಲಿ ಸಮಸ್ತ ಎಂಬ ಸಂಘಟನೆಯ ಸದಸ್ಯರಾದ ಅವರು1960 ರಲ್ಲಿ ಮುಶಾವರ ಸದಸ್ಯರು ಆದರು.
1989 ರಿಂದ ಸಮಸ್ತ ಉಪಾಧ್ಯಕ್ಷರು, 2014ರಲ್ಲಿ ಸಮಸ್ತದ 8ನೇ ಅಧ್ಯಕ್ಷರು ಆದರು.
ಸಮಸ್ತ ಕೇರಳ ಇಸ್ಲಾಮಿಕ ವಿದ್ಯಾಭ್ಯಾಸ ಬೋರ್ಡ್ ( 1951 ), 1997 ಎಜುಕೇಶನ್ ಬೋರ್ಡ್ ಓಫ್ ಇಂಡಿಯಾದ ಅಧ್ಯಕ್ಷರು, 2002ರಲ್ಲಿ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷರು, ಸುನ್ನೀ ಯುವ ಜನಸಂಘ ( 1954 ), ಜಂಇಯ್ಯುತ್ತುಲ್ ಮುಅಲ್ಲಿಮೀನ್ ( 1958 ), ಎಂಬಿತ್ಯಾದಿಗಳ ಸ್ಥಾಪಕ ಸದಸ್ಯರಾಗಿದ್ದರು.
ನಂತರ ವಿದ್ಯಾಭ್ಯಾಸ ಬೋರ್ಡ್ ಸೆಕ್ರೆಟರಿ, ಸುನ್ನೀ ಯುವಜನ ಸಂಘ ಕೇರಳ ರಾಜ್ಯ ಅಧ್ಯಕ್ಷರು. (1983-95 ) ಜಂಇಯ್ಯತ್ತುಲ್ ಮುಅಲ್ಲಿಮೀನ್ ಕೇಂದ್ರ ಕೌಂಸಿಲ್ ಅಧ್ಯಕ್ಷರು ( 1965 ), ಕೇಂದ್ರ ಕೌಂಸಿಲ್ ಸೆಕ್ರೇಟರಿ ( 1976-89 )
ಎಂಬಿತ್ಯಾದಿ ಸ್ಥಾನಗಳನ್ನು ಅಲಂಕರಿಸಿ ತನ್ನ ವ್ಯಕ್ತಿ ಮುದ್ರೆ ಒತ್ತಿದರು.
ಕೃತ್ಯನಿಷ್ಠೆಗಳ, ಕರ್ಮಕೌಶಲ್ಯಗಳ ಯುವತ್ವವಾಗಿತ್ತು ಮಹಾನರ ವಫಾತಿನ ವರೆಗಿನ ಜೀವನ.
ಸಮಸ್ತದ ಪ್ರಥಮ ಕಾಲದ ಪಂಡಿತರೊಂದಿಗಿರುವ ಸಂಬಂಧ ಮಹಾನವರನ್ನು ದೀನೀ ವಿಷಯದಲ್ಲಿ ಕರ್ಮ ನಿರತರಾಗಲು ಕಾರಣವಾಯಿತು.
ಮದ್ರಸ ರೀತಿಯಲ್ಲಿ, ಸಮನ್ವಯ ಧಾರ್ಮಿಕ ವಿದ್ಯಾಭ್ಯಾಸವನ್ನು ಆವಿಷ್ಕರಿಸಿದರು.
ಸುನ್ನೀ ಯುವ ಜನಸಂಘಕ್ಕೂ ಸುನ್ನಿ ವಿದ್ಯಾರ್ಥಿ ಸಂಘಕ್ಕೂ ಆಶಯಗಳನ್ನು ವಿತರಿಸಿ, ಎಲ್ಲಾ ಅರ್ಥದಲ್ಲಿಯೂ ಜನರನ್ನು ಸಂಸ್ಕರಿಸಲು ಪ್ರಚೋದನೆ ನೀಡಿದರು.
ಸೊಷಿಯಲಿಸಂ'ಅನ್ನು ವಿದ್ಯಾಸಂಪನ್ನರು ತಿಳಿಯುವ ಮೊದಲೇ ಅದರ ಕುರಿತು ಒಂದು ಇಸ್ಲಾಮಿಕ ಗ್ರಂಥವನ್ನು ಮಲಯಾಳಂ ಭಾಷೆಯಲ್ಲಿ ರಚಿಸಿರುವುದು ತನ್ನ ದೂರದೃಷ್ಟಿಯ ಅಗಾಧವಾದ ಪಾಂಡಿತ್ಯಕ್ಕೆ ಒಂದು ಉದಾಹರಣೆ ಮಾತ್ರವಾಗಿದೆ.
ಸುನ್ನೀ ಸಂಘ ಶಕ್ತಿಗಳ ವಿರುದ್ಧ ಬರುತ್ತಿದ್ದ ಅಪಪ್ರಚಾರಕ್ಕೆ ಪತ್ರ ಮುಖಾಂತರ ನಿರಂತರ ಉತ್ತರ ಬರೆಯುತ್ತಿದ್ದರು.
ವ್ಯವಸ್ಥಾಪಿತವಾಗಿ ಕೇರಳದ ಪ್ರಥಮ ಮಾದರಿ ಸ್ಥಾಪನೆಯಾಗಿ *"ಜಾಮಿಯಾ ಸಅದಿಯಾ ಅರಬೀಯಾ"* ಇಂದು ಪ್ರಜ್ವಲಿಸುತ್ತಿದೆ. ಅಲ್ಲದೇ ಸೌದಿ ಅರೇಬಿಯಾದಲ್ಲಿ ಇಂದಿಗೂ ನಿರಂತರವಾಗಿ ಉಮ್ರಾ ಯಾತ್ರಿಕರಿಗೆ ಪವಿತ್ರವಾದ ಹಜ್ ಮತ್ತು ಉಮ್ರಾ ನಿರ್ವಹಣೆಗೆ ಉತ್ತಮ ಮಾರ್ಗದರ್ಶನ ನೀಡುವ ಸಲುವಾಗಿ *"ಜಾಮಿಯಾ ಸಅದಿಯಾ ಅರಬಿಯಾ"* ವತಿಯಿಂದ ಹಜ್ & ಉಮ್ರಾ ನಿರ್ವಹಿಸಲು ವಿವಿಧ ರಾಜ್ಯಗಳಿಂದ ಬರುವ ಯಾತ್ರಿಕರಿಗೆ ಗ್ರೂಪು (ಹಮ್ಲಾ) ವನ್ನು ರಚಿಸಲು ಪ್ರಥಮ ಹೆಜ್ಜೆ ಮುಂದಿಟ್ಟವರು *"ನೂರುಲ್ ಉಲಮಾ, ಎಂ.ಎ ಅಬ್ದುಲ್ ಖಾದರ್ ಮುಸ್ಲಿಯಾರ್" ನ:ಮ* ರವರಾಗಿದ್ದಾರೆ.
ಒಂದು ಶತಮಾನದೊಳಗೆ ದೀನಿ ರಂಗದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ ಅದ್ಬುತ ಪ್ರತಿಭೆಯಾಗಿದ್ದರು ಮಹಾನರು.
ಅಗಾಧ ಪಾಂಡಿತ್ಯವನ್ನು ಹೊಂದಿದ ಪ್ರಮುಖ ಸೂಫಿವರ್ಯರಾದ *"ನೂರುಲ್ ಉಲಮಾ ಎಂ.ಎ. ಉಸ್ತಾದರು* ತನ್ನ ಅಂತ್ಯಯಾತ್ರೆಯ ನಂತರ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಕೂಡಾ ಮುಂಚಿತವಾಗಿ ಬರೆದಿಟ್ಟು ಧನ್ಯರಾಗಿ ವಫಾತ್ ಆಗಲು ಮಹಾನರಿಗೆ ಭಾಗ್ಯ ಲಭಿಸಿತ್ತು.
ಮಹಾನುಭಾವರಾದ ಈ ಆತ್ಮೀಯ ಗುರು ಅರಬಿ, ಮಲಯಾಳಂ ಭಾಷೆಗಳಲ್ಲಿ ಬೃಹತ್ತಾದ 40 ರಷ್ಟು ಗ್ರಂಥಗಳನ್ನು ಸಮುದಾಯಕ್ಕೆ ಸಮರ್ಪಿಸಿದ್ದಾರೆ.
2015 ಫೆಬ್ರವರಿ 17, ರಬೀವುಲ್ ಆಖಿರ್ 28'ರಂದು ಈ ಲೋಕದಿಂದ ನಮ್ಮನ್ನಗಲಿ ಶಾಶ್ವತ ಲೋಕಕ್ಕೆ ಯಾತ್ರೆಯಾದರು.
ತನ್ನ ಜೀವನದ ದೀಪ್ತವಾದ ನೆನಪುಗಳು ನೆಲೆಗೊಳ್ಳುವ ಸಅದಿಯ್ಯಾ ಮಸ್ಜಿದ್'ನ ಅಂಗಳದಲ್ಲಿ ಮಹಾನರು ಇಂದು ಅಂತ್ಯವಿಶ್ರಮಗೊಳ್ಳುತ್ತಿದ್ದಾರೆ. ಇಂದಿಗೂ ದಿನ ಬೆಳಗಾದಂತೆ ನೂರಾರು ಯಾತ್ರಿಕರು ಮಹಾನುಭಾವರ ಪುಣ್ಯ ಮಖ್ಬರ ಸಂದರ್ಶಿಸಲು ಬರುತ್ತಿದ್ದಾರೆ.
ದಾರಿ; ಕಾಸರಗೋಡು-ಕಾಲ್ನಾಡು-ದೇಳಿ ದಾರಿಯಾಗಿ ಜಾಮಿಯಾ ಸಅದಿಯಾ ಅರಬೀಯಾ.
ಅಲ್ಲದೇ ಕಾಸರಗೋಡು- ಮೇಲ್ಪರಂಬ ದಾರಿಯಾಗಿಯೂ ಜಾಮಿಯಾ ಸಾದಿಯಾ ಅರಬಿಯಾಕ್ಕೆ ಹೋಗಲು ಸುಗಮ ದಾರಿಯಿದೆ.
🔹ಮುಗಿಯಿತು.
✍ ಗಫೂರ್ ಬಾಯಾರ್
➖➖➖➖➖➖➖ ಕಾಸರಗೋಡು ಜಿಲ್ಲೆಯ ತೃಕರಿಪ್ಪುರ್ ಪಂಚಾಯತ್ತಿನ ಉಡುಬುಂತಳ ಎಂಬ ಸ್ಥಳದಲ್ಲಿ ಕುರಿಯ ಅಬ್ದುಲ್ಲ ಹಾಜಿ, ಹಾಗೂ ನಲೂರಪ್ಪಾಡ್ ಮರ್ಯಂ ದಂಪತಿಗಳ ಮಗನಾಗಿ ಈ ಶತಮಾನಕ್ಕೆ ದೀನೀ ಜ್ಞಾನದ ಸೂರ್ಯ ಪ್ರಭೆ ಪಸರಿಸಿದ ಸಮಸ್ತದ ಸಾತ್ವಿಕರಾದ ಪಂಡಿತ ಶಿರೋಮಣಿ ಎಂ.ಎ. ಅಬ್ದುಲ್ ಖಾದಿರ್ ಉಸ್ತಾದ್ ನ:ಮ. ರವರು 1924 ಜುಲೈ 01ಕ್ಕೆ ( 1342 ರಜಬ್ 29 ) ಜನಿಸಿದರು.
ಅಬ್ದುಲ್ ಖಾದಿರ್ ಹಾಜಿ (ಅಜ್ಜ) ಅಹ್ಮದ್ ಮುಸ್ಲಿಯಾರ್ (ಮಾವ), ತೃಕರಿಪ್ಪುರ್ ಹಾಫಿಲ್ ಶಾಹುಲ್ ಹಮೀದ್ ತಂಗಳ್, ನಾದಾಪುರಂ ಶಿರಾಸಿ ಮುಸ್ಲಿಯಾರ್, ಕೊಯಪ್ಪ ಮುಹಮ್ಮದ್ ಕುಟ್ಟಿ ಮುಸ್ಲಿಯಾರ್, ಎನ್.ಸಿ. ಅಬ್ದುಲ್ ಖಾದಿರ್ ಮುಸ್ಲಿಯಾರ್, ಮೊದಲಾದ ಪಂಡಿತರಿಂದ ಮಹಾನವರು ವಿದ್ಯೆ ಕಲಿತರು.
ಎಝುಮಲ ಹಾಮಿದ್ ಕೋಯಮ್ಮ ತಂಗಳ್ ನ:ಮ, ಕೊಟ್ಟಾಯಂ ಶೈಖ್ ಅಬೂಬಕ್ಕರ್ ಮುಸ್ಲಿಯಾರ್ ನ:ಮ, ಚಾಪ್ಪನಂಗಾಡಿ ಬಾಪ್ಪು ಮುಸ್ಲಿಯಾರ್ ನ:ಮ, ಕಕ್ಕಡಿಪುರಂ ಅಬೂಬಕ್ಕರ್ ಮುಸ್ಲಿಯಾರ್ ನ:ಮ, ಪಾನಾಯಿಕುಳಂ ಅಬ್ದುರಹ್ಮಾನ್ ಮುಸ್ಲಿಯಾರ್ ನ:ಮ, ಚಾವಕ್ಕಾಡ್ ಮುಹಮ್ಮದ್ ಕುಂಞಿ ತಂಗಳ್ ನ:ಮ, ಈಸಾ ಚೆರುಕುಂಞಿ ಕೋಯ ತಂಗಳ್ ನ:ಮ, ಮುಂತಾದವರಿಂದ ತನ್ನ ದೀನೀ ಜ್ಞಾನ ಹಾಗು ಆತ್ಮೀಯ ಲೋಕವನ್ನು ವಿಕಾಸಗೊಳಿಸಿದರು.
ನಂತರ ತೃಕರಿಪ್ಪುರ್ ಮೆಟ್ಟಮ್ಮಲ್ ( 1949-73 ), ತಳಿಪ್ಪರಂಬ್ ಖುವ್ವತ್ತುಲ್ ಇಸ್ಲಾಂ ( 1973-78 ), ಉದಿನೂರ್ ( 78-79 ), ಜಾಮಿಅ ಸಅದಿಯ್ಯ ( 1979ರಿಂದ ತನ್ನ ವಫಾತಿನ ವರೆಗೆ) ದರ್ಸ್ ರಂಗದಲ್ಲಿ ಸೇವನೆಗೈದರು.
1946ರಲ್ಲಿ ಸಮಸ್ತ ಎಂಬ ಸಂಘಟನೆಯ ಸದಸ್ಯರಾದ ಅವರು1960 ರಲ್ಲಿ ಮುಶಾವರ ಸದಸ್ಯರು ಆದರು.
1989 ರಿಂದ ಸಮಸ್ತ ಉಪಾಧ್ಯಕ್ಷರು, 2014ರಲ್ಲಿ ಸಮಸ್ತದ 8ನೇ ಅಧ್ಯಕ್ಷರು ಆದರು.
ಸಮಸ್ತ ಕೇರಳ ಇಸ್ಲಾಮಿಕ ವಿದ್ಯಾಭ್ಯಾಸ ಬೋರ್ಡ್ ( 1951 ), 1997 ಎಜುಕೇಶನ್ ಬೋರ್ಡ್ ಓಫ್ ಇಂಡಿಯಾದ ಅಧ್ಯಕ್ಷರು, 2002ರಲ್ಲಿ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷರು, ಸುನ್ನೀ ಯುವ ಜನಸಂಘ ( 1954 ), ಜಂಇಯ್ಯುತ್ತುಲ್ ಮುಅಲ್ಲಿಮೀನ್ ( 1958 ), ಎಂಬಿತ್ಯಾದಿಗಳ ಸ್ಥಾಪಕ ಸದಸ್ಯರಾಗಿದ್ದರು.
ನಂತರ ವಿದ್ಯಾಭ್ಯಾಸ ಬೋರ್ಡ್ ಸೆಕ್ರೆಟರಿ, ಸುನ್ನೀ ಯುವಜನ ಸಂಘ ಕೇರಳ ರಾಜ್ಯ ಅಧ್ಯಕ್ಷರು. (1983-95 ) ಜಂಇಯ್ಯತ್ತುಲ್ ಮುಅಲ್ಲಿಮೀನ್ ಕೇಂದ್ರ ಕೌಂಸಿಲ್ ಅಧ್ಯಕ್ಷರು ( 1965 ), ಕೇಂದ್ರ ಕೌಂಸಿಲ್ ಸೆಕ್ರೇಟರಿ ( 1976-89 )
ಎಂಬಿತ್ಯಾದಿ ಸ್ಥಾನಗಳನ್ನು ಅಲಂಕರಿಸಿ ತನ್ನ ವ್ಯಕ್ತಿ ಮುದ್ರೆ ಒತ್ತಿದರು.
ಕೃತ್ಯನಿಷ್ಠೆಗಳ, ಕರ್ಮಕೌಶಲ್ಯಗಳ ಯುವತ್ವವಾಗಿತ್ತು ಮಹಾನರ ವಫಾತಿನ ವರೆಗಿನ ಜೀವನ.
ಸಮಸ್ತದ ಪ್ರಥಮ ಕಾಲದ ಪಂಡಿತರೊಂದಿಗಿರುವ ಸಂಬಂಧ ಮಹಾನವರನ್ನು ದೀನೀ ವಿಷಯದಲ್ಲಿ ಕರ್ಮ ನಿರತರಾಗಲು ಕಾರಣವಾಯಿತು.
ಮದ್ರಸ ರೀತಿಯಲ್ಲಿ, ಸಮನ್ವಯ ಧಾರ್ಮಿಕ ವಿದ್ಯಾಭ್ಯಾಸವನ್ನು ಆವಿಷ್ಕರಿಸಿದರು.
ಸುನ್ನೀ ಯುವ ಜನಸಂಘಕ್ಕೂ ಸುನ್ನಿ ವಿದ್ಯಾರ್ಥಿ ಸಂಘಕ್ಕೂ ಆಶಯಗಳನ್ನು ವಿತರಿಸಿ, ಎಲ್ಲಾ ಅರ್ಥದಲ್ಲಿಯೂ ಜನರನ್ನು ಸಂಸ್ಕರಿಸಲು ಪ್ರಚೋದನೆ ನೀಡಿದರು.
ಸೊಷಿಯಲಿಸಂ'ಅನ್ನು ವಿದ್ಯಾಸಂಪನ್ನರು ತಿಳಿಯುವ ಮೊದಲೇ ಅದರ ಕುರಿತು ಒಂದು ಇಸ್ಲಾಮಿಕ ಗ್ರಂಥವನ್ನು ಮಲಯಾಳಂ ಭಾಷೆಯಲ್ಲಿ ರಚಿಸಿರುವುದು ತನ್ನ ದೂರದೃಷ್ಟಿಯ ಅಗಾಧವಾದ ಪಾಂಡಿತ್ಯಕ್ಕೆ ಒಂದು ಉದಾಹರಣೆ ಮಾತ್ರವಾಗಿದೆ.
ಸುನ್ನೀ ಸಂಘ ಶಕ್ತಿಗಳ ವಿರುದ್ಧ ಬರುತ್ತಿದ್ದ ಅಪಪ್ರಚಾರಕ್ಕೆ ಪತ್ರ ಮುಖಾಂತರ ನಿರಂತರ ಉತ್ತರ ಬರೆಯುತ್ತಿದ್ದರು.
ವ್ಯವಸ್ಥಾಪಿತವಾಗಿ ಕೇರಳದ ಪ್ರಥಮ ಮಾದರಿ ಸ್ಥಾಪನೆಯಾಗಿ *"ಜಾಮಿಯಾ ಸಅದಿಯಾ ಅರಬೀಯಾ"* ಇಂದು ಪ್ರಜ್ವಲಿಸುತ್ತಿದೆ. ಅಲ್ಲದೇ ಸೌದಿ ಅರೇಬಿಯಾದಲ್ಲಿ ಇಂದಿಗೂ ನಿರಂತರವಾಗಿ ಉಮ್ರಾ ಯಾತ್ರಿಕರಿಗೆ ಪವಿತ್ರವಾದ ಹಜ್ ಮತ್ತು ಉಮ್ರಾ ನಿರ್ವಹಣೆಗೆ ಉತ್ತಮ ಮಾರ್ಗದರ್ಶನ ನೀಡುವ ಸಲುವಾಗಿ *"ಜಾಮಿಯಾ ಸಅದಿಯಾ ಅರಬಿಯಾ"* ವತಿಯಿಂದ ಹಜ್ & ಉಮ್ರಾ ನಿರ್ವಹಿಸಲು ವಿವಿಧ ರಾಜ್ಯಗಳಿಂದ ಬರುವ ಯಾತ್ರಿಕರಿಗೆ ಗ್ರೂಪು (ಹಮ್ಲಾ) ವನ್ನು ರಚಿಸಲು ಪ್ರಥಮ ಹೆಜ್ಜೆ ಮುಂದಿಟ್ಟವರು *"ನೂರುಲ್ ಉಲಮಾ, ಎಂ.ಎ ಅಬ್ದುಲ್ ಖಾದರ್ ಮುಸ್ಲಿಯಾರ್" ನ:ಮ* ರವರಾಗಿದ್ದಾರೆ.
ಒಂದು ಶತಮಾನದೊಳಗೆ ದೀನಿ ರಂಗದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ ಅದ್ಬುತ ಪ್ರತಿಭೆಯಾಗಿದ್ದರು ಮಹಾನರು.
ಅಗಾಧ ಪಾಂಡಿತ್ಯವನ್ನು ಹೊಂದಿದ ಪ್ರಮುಖ ಸೂಫಿವರ್ಯರಾದ *"ನೂರುಲ್ ಉಲಮಾ ಎಂ.ಎ. ಉಸ್ತಾದರು* ತನ್ನ ಅಂತ್ಯಯಾತ್ರೆಯ ನಂತರ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಕೂಡಾ ಮುಂಚಿತವಾಗಿ ಬರೆದಿಟ್ಟು ಧನ್ಯರಾಗಿ ವಫಾತ್ ಆಗಲು ಮಹಾನರಿಗೆ ಭಾಗ್ಯ ಲಭಿಸಿತ್ತು.
ಮಹಾನುಭಾವರಾದ ಈ ಆತ್ಮೀಯ ಗುರು ಅರಬಿ, ಮಲಯಾಳಂ ಭಾಷೆಗಳಲ್ಲಿ ಬೃಹತ್ತಾದ 40 ರಷ್ಟು ಗ್ರಂಥಗಳನ್ನು ಸಮುದಾಯಕ್ಕೆ ಸಮರ್ಪಿಸಿದ್ದಾರೆ.
2015 ಫೆಬ್ರವರಿ 17, ರಬೀವುಲ್ ಆಖಿರ್ 28'ರಂದು ಈ ಲೋಕದಿಂದ ನಮ್ಮನ್ನಗಲಿ ಶಾಶ್ವತ ಲೋಕಕ್ಕೆ ಯಾತ್ರೆಯಾದರು.
ತನ್ನ ಜೀವನದ ದೀಪ್ತವಾದ ನೆನಪುಗಳು ನೆಲೆಗೊಳ್ಳುವ ಸಅದಿಯ್ಯಾ ಮಸ್ಜಿದ್'ನ ಅಂಗಳದಲ್ಲಿ ಮಹಾನರು ಇಂದು ಅಂತ್ಯವಿಶ್ರಮಗೊಳ್ಳುತ್ತಿದ್ದಾರೆ. ಇಂದಿಗೂ ದಿನ ಬೆಳಗಾದಂತೆ ನೂರಾರು ಯಾತ್ರಿಕರು ಮಹಾನುಭಾವರ ಪುಣ್ಯ ಮಖ್ಬರ ಸಂದರ್ಶಿಸಲು ಬರುತ್ತಿದ್ದಾರೆ.
ದಾರಿ; ಕಾಸರಗೋಡು-ಕಾಲ್ನಾಡು-ದೇಳಿ ದಾರಿಯಾಗಿ ಜಾಮಿಯಾ ಸಅದಿಯಾ ಅರಬೀಯಾ.
ಅಲ್ಲದೇ ಕಾಸರಗೋಡು- ಮೇಲ್ಪರಂಬ ದಾರಿಯಾಗಿಯೂ ಜಾಮಿಯಾ ಸಾದಿಯಾ ಅರಬಿಯಾಕ್ಕೆ ಹೋಗಲು ಸುಗಮ ದಾರಿಯಿದೆ.
🔹ಮುಗಿಯಿತು.
✍ ಗಫೂರ್ ಬಾಯಾರ್


Comments